ನವೆಂಬರ್ 2003ರಲ್ಲಿ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕದನ ವಿರಾಮಕ್ಕೆ ಸಹಿ ಹಾಕಿದ್ದವು. ಆದರೆ ಅದನ್ನು ಪಾಕಿಸ್ತಾನ ನಿರ್ಭೀತಿಯಿಂದ ಉಲ್ಲಂಘಿಸುತ್ತಲೇ ಬಂದಿದೆ. ಹಾಗಾಗಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಭಾರತಕ್ಕೆ ಯುದ್ಧ ಸಾರುವುದು ಅನಿವಾರ್ಯವಾಗಿದೆ. ಕಳೆದ ಸೆಪ್ಟೆಂಬರ್ 28ರಂದು ಮಧ್ಯರಾತ್ರಿ ಭಾರತೀಯ ಸೇನೆ ಪಾಕ್ ಆಕ್ರಮಿತ ಗಡಿ ನಿಯಂತ್ರಣ ರೇಖೆ ಬಳಿ ಇರುವ ಭಯೋತ್ಪಾದಕರ ಲಾಂಚ್ ಪಾಡ್ ಮೇಲೆ ಸೀಮಿತ ಹಠಾತ್ ದಾಳಿ ನಡೆಸಿತ್ತು.