ಛತ್ರಪತಿ ಶಿವಾಜಿ ಭಾವಚಿತ್ರವುಳ್ಳ ಟೀ-ಶರ್ಟ್ ಧರಿಸಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರವುಳ್ಳ ಟೀ-ಶರ್ಟ್ ಧರಿಸಿದ್ದ ಯುವಕನ ಮೇಲೆ ಉದ್ರಿಕ್ತ ಗುಂಪೊಂದು ಬುಧವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಹಲ್ಲೆ ಮಾಡಿದೆ...
ಶಿವಾಜಿ
ಶಿವಾಜಿ
Updated on

ಪುಣೆ: ಛತ್ರಪತಿ ಶಿವಾಜಿ ಮಹಾರಾಜ ಅವರ ಭಾವಚಿತ್ರವುಳ್ಳ ಟೀ-ಶರ್ಟ್ ಧರಿಸಿದ್ದ ಯುವಕನ ಮೇಲೆ ಉದ್ರಿಕ್ತ ಗುಂಪೊಂದು ಬುಧವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಹಲ್ಲೆ ಮಾಡಿದೆ.

ಉತ್ತರೇಶ್ವರ್ ತರುಣ್ ಮಂಡಳದ ಕಾರ್ಯಕರ್ತ 19 ವರ್ಷದ ನವಾಜ್ ಮಸೀದಿ ಶೇಖ್ ನನ್ನು ಉದ್ರಿಕ್ತರ ಗುಂಪೊಂದು ಥಳಿಸಿದ್ದು ಈ ಸಂಬಂಧ ಶೇಖ್ ವಿಮನಾಂಟಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ನಾಗೇಶ್ ರಕ್ಕಪರ್ಸೆ, ಅತುಲ್, ಸಚಿನ್ ಕಾಲ್ಸೆ, ರಾಹುಲ್ ರಕ್ಕಪರ್ಸೆ, ಸಚಿನ್, ನಿತೀನ್ ರಕ್ಕಸರ್ಪೆ ಸೇರಿದಂತೆ 30 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 149, 285, 452, 323, 504, 506(2) ಮತ್ತು 427ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಉತ್ತರೇಶ್ವರ್ ತರುಣ್ ಮಂಡಳ್ ಮರಾಠಿ ಸಮುದಾಯಕ್ಕೆ ಮೀಸಲಾತಿಗಾಗಿ ಮರಾಠಿ ಕಾಂತ್ರಿ ಮೋರ್ಚ ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ಪ್ರತಿಭಟನೆಗಾಗಿ ರಾಷ್ಟ್ರೀಯ ನಾಯಕರ ಭಾವಚಿತ್ರವುಳ್ಳ ಟೀ-ಶರ್ಟ್ ಗಳನ್ನು ಧರಿಸಿದ್ದರು. ಪ್ರತಿಭಟನೆ ಬಳಿಕ ನವಾಜ್ ಮನೆಗೆ ಹಿಂತಿರುಗುವಾಗ ಆತನ ಮೇಲೆ ಹಲ್ಲೆ ನಡೆಸಿ ಟೀ-ಶರ್ಟ್ ಅನ್ನು ಹರಿದು ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com