ಕೊಯಂಬತ್ತೂರು: 8 ಮಂದಿಯನ್ನು ಬಲಿ ಪಡೆದ ಶವಕಾಶಿ ಪಟಾಕಿ ದುರಂತದ ನಂತರ ತಮಿಳುನಾಡಿನಲ್ಲಿ ಶುಕ್ರವಾರ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಕೊಯಂಬತ್ತೂರಿನ ಗಾಂಧಿ ಪಾರ್ಕ್ ಬಳಿಯಿರುವ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ, ಹಲವು ಮಂದಿ ಗಾಯಗೊಂಡಿದ್ದಾರೆ ಮತ್ತು ಮೂವರು ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.