ಲಖನೌ: ಸಮಾಜವಾದಿ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದು ಸಿಎಂ ಅಖಿಲೇಶ್ ಯಾದವ್ ಶಿವಪಾಲ್ ಸಿಂಗ್ ಯಾದವ್ ಹಾಗೂ ಇನ್ನಿತರ 4 ಸಚಿವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ. ಸಿಎಂ ಅಖಿಲೇಶ್ ಯಾದವ್ ಅವರ ಬೆಂಬಲಿಗನನ್ನು ಸಮಾಜವಾದಿ ಪಕ್ಷದಿಂದ ಉಚ್ಛಾಟಿಸಿರುವ ಬೆನ್ನಲ್ಲೇ ಅಖಿಲೇಶ್ ಯಾದವ್ ಶಿವಪಾಲ್ ಸಿಂಗ್ ಯಾದವ್ ಸೇರಿದಂತೆ 4 ಸಚಿವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.
ಶಿವಪಾಲ್ ಯಾದವ್ ಅವರೊಂದಿಗೆ ಅವರ ಬೆಂಬಲಿಗರಾಗಿದ್ದ ನಾರದ್ ರಾಜ್, ಓಂ ಪ್ರಕಾಶ್, ಶಾದಾಬ್ ಫಾತಿಮಾ, ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರನ್ನು ಸಚಿವ ಸ್ಥಾನಗಿಂದ ವಜಾಗೊಳಿಸಲಾಗಿದೆ. ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಯಾದವ್ ಬಣ ಹಾಗೂ ಎಸ್ ಪಿ ರಾಜ್ಯ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಬಣದ ನಡುವೆ ಭಿನ್ನಮತ ಮತೊಮ್ಮೆ ಸ್ಫೋಟಗೊಂಡಿದೆ.
Advertisement