ಉತ್ತರ ಪ್ರದೇಶ: ಸಾಲ ಮಾಡಿ ರಾಹುಲ್ ಗಾಂಧಿಗೆ ರೊಟ್ಟಿ ಊಟ ಬಡಿಸಿದ ರೈತ

ಉತ್ತರಪ್ರದೇಶ ಪ್ರವಾಸದಲ್ಲಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ದಲಿತರ ಮನೆಗೆ ತೆರಳಿ ಭೋಜನ ಸೇವಿಸಿದ್ದಾರೆ....
ದಲಿತರ ಮನೆಯಲ್ಲಿ  ಊಟ ಮಾಡುತ್ತಿರುವ ರಾಹುಲ್ ಗಾಂಧಿ
ದಲಿತರ ಮನೆಯಲ್ಲಿ ಊಟ ಮಾಡುತ್ತಿರುವ ರಾಹುಲ್ ಗಾಂಧಿ
Updated on

ನವದೆಹಲಿ: ಉತ್ತರಪ್ರದೇಶ ಪ್ರವಾಸದಲ್ಲಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ದಲಿತರ ಮನೆಗೆ ತೆರಳಿ ಭೋಜನ ಸೇವಿಸಿದ್ದಾರೆ.

ರಾಹುಲ್ ಗಾಂಧಿಗೆ ಭೋಜನ ಸಿದ್ಧಪಡಿಸಲು ಈ ಬಡ ಕುಟುಂಬದ ಬಳಿ ಹಣವಿರಲಿಲ್ಲ. ಹೀಗಾಗಿ ಆ ರೈತ ಪಕ್ಕದ ಮನೆಯ ಮತ್ತೊಬ್ಬ ರೈತನ ಹತ್ತಿರ ಹಣ ಸಾಲ ಪಡೆದು ರೊಟ್ಟಿ ಅಡುಗೆ ಮಾಡಿ ಬಡಿಸಿದ್ದಾರೆ. 

ರಾಹುಲ್ ಗಾಂಧಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರೊಂದಿಗೆ ಬಡ ರೈತ ಸ್ವಾಮಿನಾಥ್ ಮನೆಗೆ ತೆರಳಿ ಊಟ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸ್ವಾಮಿನಾಥ್‌ನ ರಾಹುಲ್‌‌ ದೇವರ ಸಮಾನ. ನಮಗೆ ಯಾವುದೇ ಕಷ್ಟವಾದರೂ ಅವರಿಗೆ ಊಟ ಹಾಕುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ಸಾಲ ಮಾಡಿರುವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com