ಭಗವಾನ್ ಶ್ರೀಕೃಷ್ಣ ಚುಡಾವಣೆಗೆ ಪ್ರಸಿದ್ಧಿಯಾಗಿದ್ದ : ಪ್ರಶಾಂತ್ ಭೂಷಣ್ ವಿವಾದಾತ್ಮಕ ಹೇಳಿಕೆ

ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಪ್ರಾರಂಭಿಸಲಾಗಿರುವ ಆಂಟಿ ರೋಮಿಯೋ ದಳದ ಬಗ್ಗೆ ಹೇಳಿಕೆ ನೀಡಲು ಹೋಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಶ್ರೀ ಕೃಷ್ಣನ ಬಗ್ಗೆ ವಿವಾದಾತ್ಮಕ ಹೇಳಿಕೆ...
ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್
ನವದೆಹಲಿ: ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಪ್ರಾರಂಭಿಸಲಾಗಿರುವ ಆಂಟಿ ರೋಮಿಯೋ ದಳದ ಬಗ್ಗೆ ಹೇಳಿಕೆ ನೀಡಲು ಹೋಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಶ್ರೀ ಕೃಷ್ಣನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಶ್ರೀ ಕೃಷ್ಣನಿಗೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಪ್ರಶಾಂತ್ ಭೂಷಣ್, ಶ್ರೀ ಕೃಷ್ಣ ಚುಡಾಯಿಸುತ್ತಿದ್ದ, ಅದಕ್ಕಾಗಿಯೇ ಪ್ರಸಿದ್ಧಿಯನ್ನೂ ಗಳಿಸಿದ್ದ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಆದಿತ್ಯನಾಥ್ ತಾವು ರಚಿಸಿರುವ ದಳವನ್ನು ಆಂಟಿ ಕೃಷ್ಣ ದಳ ಎಂದು ಹೆಸರಿಸುವ ಧೈರ್ಯ ತೋರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. 
ಸ್ವರಾಜ್ ಇಂಡಿಯಾದ ವಕ್ತಾರ ಅನುಪಮ್ ಆಂಟಿ ರೋಮಿಯೋ ದಳದ ಬಗ್ಗೆ ಟ್ವೀಟ್ ಮಾಡಿ, ಆಂಟಿ ರೋಮಿಯೋ ದಳ ಷೇಕ್ಸ್ ಪಿಯರ್ ಗೆ ಭಾರತ ನೀಡಿರುವ ಗೌರವವಾಗಿದೆ. ಅಂಟೆಯೇ ಇಂಗ್ಲೆಂಡ್ ನಲ್ಲಿ ಚುಡಾವಣೆಯನ್ನು ತಡೆಗಟ್ಟಲು ಆಂಟಿ ಕೃಷ್ಣ ದಳವನ್ನು ಪ್ರಾರಂಭಿಸಿದರೆ ಅಚ್ಚರಿ ಪಡಬೇಡಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಭೂಷಣ್, ಕೃಷ್ಣ ಚುಡಾವಣೆಗೆ ಪ್ರಸಿದ್ಧಿಯಾಗಿದ್ದ. ಸಿಎಂ ಆದಿತ್ಯನಾಥ್ ತಾವು ರಚಿಸಿರುವ ದಳವನ್ನು ಆಂಟಿ ಕೃಷ್ಣ ದಳ ಎಂದು ಹೆಸರಿಸುವ ಧೈರ್ಯ ತೋರುತ್ತಾರೆಯೇ ಎಂದು ಸವಾಲು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com