ಸ್ವರಾಜ್ ಇಂಡಿಯಾದ ವಕ್ತಾರ ಅನುಪಮ್ ಆಂಟಿ ರೋಮಿಯೋ ದಳದ ಬಗ್ಗೆ ಟ್ವೀಟ್ ಮಾಡಿ, ಆಂಟಿ ರೋಮಿಯೋ ದಳ ಷೇಕ್ಸ್ ಪಿಯರ್ ಗೆ ಭಾರತ ನೀಡಿರುವ ಗೌರವವಾಗಿದೆ. ಅಂಟೆಯೇ ಇಂಗ್ಲೆಂಡ್ ನಲ್ಲಿ ಚುಡಾವಣೆಯನ್ನು ತಡೆಗಟ್ಟಲು ಆಂಟಿ ಕೃಷ್ಣ ದಳವನ್ನು ಪ್ರಾರಂಭಿಸಿದರೆ ಅಚ್ಚರಿ ಪಡಬೇಡಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಭೂಷಣ್, ಕೃಷ್ಣ ಚುಡಾವಣೆಗೆ ಪ್ರಸಿದ್ಧಿಯಾಗಿದ್ದ. ಸಿಎಂ ಆದಿತ್ಯನಾಥ್ ತಾವು ರಚಿಸಿರುವ ದಳವನ್ನು ಆಂಟಿ ಕೃಷ್ಣ ದಳ ಎಂದು ಹೆಸರಿಸುವ ಧೈರ್ಯ ತೋರುತ್ತಾರೆಯೇ ಎಂದು ಸವಾಲು ಹಾಕಿದ್ದಾರೆ.