ಅಯೋಧ್ಯಯಲ್ಲಿ ರಾಮ ನವಮಿ ಆಚರಣೆ ವೇಳೆ ಕಾಲ್ತುಳಿತ, ಓರ್ವ ಮಹಿಳೆ ಸಾವು

ಅಯೋಧ್ಯಯಲ್ಲಿ ಬುಧವಾರ ನಡೆದ ರಾಮ ನವಮಿ ಮೇಳದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲಖನೌ: ಅಯೋಧ್ಯಯಲ್ಲಿ ಬುಧವಾರ ನಡೆದ ರಾಮ ನವಮಿ ಮೇಳದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ರಾಮ ಜನ್ಮಭೂಮಿ ಮಂದಿರ ಸಮೀಪ ಇರುವ ತುಳಸಿ ಉದ್ಯಾನದಲ್ಲಿ ಮೊದಲ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಸಿದ್ಧಾರ್ಥನಗರ ಜಿಲ್ಲೆಯ 65 ವರ್ಷದ ದುಲರಿ ದೇವಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. 
ತುಳಸಿ ಭವನದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಜನರ ತಳ್ಳಾಟದಿಂದ ದುಲರಿ ಕೆಳಗೆ ಬಿದ್ದಿದ್ದು, ಕಾಲ್ತುಳಿತದಿಂದಾಗಿ ತನ್ನ ಪತ್ನಿ ಮೃತಪಟ್ಟಿದ್ದಾರೆ ಎಂದು ದುಲರಿ ಪತಿ ಸಾಧು ರಾಮ್ ಅವರು ಹೇಳಿದ್ದಾರೆ. 
ಈ ಮಧ್ಯೆ ದುಲರಿ ದೇವಿ ಭಾರಿ ಜನಸಂದಣಿ ಮಧ್ಯ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಫೈಜಾಬಾದ್ ಎಸ್ಎಸ್ ಪಿ ಅನಂತ್ ಡಿಯೋ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಲಖಪತಿ ದೇವಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರಯು ನದಿ ದಡದಲ್ಲಿರುವ ಬಂಧತಿರಾದಲ್ಲಿ ಮತ್ತೊಂದು ಕಾಲ್ತುಳಿತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಗಾಯಾಳುಗಳ ಸಂಖ್ಯೆಯನ್ನು ಸ್ಥಳೀಯ ಆಡಳಿತ ಇನ್ನು ಖಚಿತಪಡಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com