ನಂತರ ಮಾತನಾಡಿದ್ದ ಶಿವಸೇನೆ ಸಂಸದ ಅನಂತ್ ಗೀತೆಯವರು, ಗಾಯಕ್ವಾಡ್ ಪ್ರಯಾಣಕ್ಕೆ ವಿಮಾನ ಸಂಸ್ಥೆಗಳು ಹೇರಿರುವ ನಿಷೇಧದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಮುಂಬೈನಿಂದ ಒಂದು ವಿಮಾನ ಕೂಡ ಹೊರಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಅಲ್ಲದೆ, ವಿಮಾನಯಾನ ಸಚಿವರ ಮೇಜನ್ನು ಹಲವು ಬಾರಿ ತಟ್ಟಿದರು. ಅನಂತ್ ಗೀತೆಯವರು ಈ ರೀತಿಯ ವರ್ತನೆ ತೋರುತ್ತಿದ್ದರೂ, ಗಜಪತಿ ರಾಜು ಅವರು ಮಾತ್ರ ಸಮಾಧಾನದಿಂದಲೇ ಸಮರ್ಥನೆ ನೀಡುತ್ತಿದ್ದರು.
ಕೆಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಅನಂತ್ ಗೀತೆಯವರ ವರ್ತನೆ ತೀವ್ರಗೊಳ್ಳುತ್ತಿದಂತೆಯೇ ಸಚಿವ ಗಜಪತಿ ರಾಜು ಅವರ ರಕ್ಷಣೆಗೆ ಕೆಲ ಬಿಜೆಪಿ ಸಂಸದರು ಧಾವಿಸಿದ್ದರು ಎಂದು ತಿಳಿಸಿವೆ. ನಂತರ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರು ರಾಜು ಅವರ ಮೇಜಿನ ಬಳಿ ಹೋಗಿ ಗೀತೆ ಅವರನ್ನು ಸಮಧಾನಪಡಿಸಿದ್ದಾರೆ.
ನಂತರ ಸಂಸತ್ತಿನಲ್ಲಿ ಉಂಟಾಗಿದ್ದ ಉದ್ರಿಕ್ತ ವಾತಾವರಣ ತಿಳಿಗೊಂಡಿದೆ. ಗಜಪತಿಯವರು ಹೇಳಿಕೆ ನೀಡಿದ ಬಳಿಕ ಸ್ಪೀಕರ್ ಮಹಾಜನ್ ಅವರು ಕಲಾಪವನ್ನು ಮುಂದೂಡಿದರು. ಸಂಸತ್ತಿನಲ್ಲಿ ಎಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಬಿಜೆಪಿ ಮಾತ್ರ ಮೌನವಹಿಸಿತ್ತು. ಈ ಮೂಲಕ ಬಿಜೆಪಿ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.