ನಿನ್ನೆಯಷ್ಟೇ ತ್ರಿವಳಿ ತಲಾಖ್ ವಿವಾದ ಕುರಿತಂತೆ ಹೇಳಿಕೆ ನೀಡಿದ್ದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರು, ತ್ರಿವಳಿ ತಲಾಖ್ ಎಂಬ ನಿಯಮ ಕುರಾನ್ ನಲ್ಲಿ ಇಲ್ಲ, ಮುಸ್ಲಿಂ ಮಹಿಳೆಯರು ಮೌಲಾನಾಗಳು ಹಾಗೂ ಮೌಲ್ವಿಗಳ ಮಾತು ಕೇಳುವುದನ್ನು ನಿಲ್ಲಿಸಬೇಕು. ಮೌಲ್ವಿಗಳ ಮಾತುಗಳನ್ನು ಕೇಳುವ ಬದಲು ಮುಸ್ಲಿಂ ಮಹಿಳೆಯಲು ತಾವೇ ಸ್ವತಃ ಕುರಾನ್ ನ್ನು ಓದಿ ತಿಳಿಯಬೇಕಿದೆ ಎಂದು ಹೇಳಿದ್ದರು.