ಸೀಮಿತ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಶತ್ರುತ್ವ ಮತ್ತಷ್ಟು ಹೆಚ್ಚಾಗುವಂತಾಗಿತ್ತು. ಇದಾದ ಬಳಿಕ ಭಾರತದ ಪಾಕಿಸ್ತಾನದ ಉಗ್ರರು ಒಂದಾದ ನಂತರ ಒಂದಂತೆ ದಾಳಿಗಳನ್ನು ನಡೆಸುತ್ತಲೇ ಇದೆ, ಈಗಲೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಗಡಿ ನುಸುಳಲು ಉಗ್ರರು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಸೇನಾ ಪಡೆಯ ಕಾರ್ಯ ಚಟುವಟಿಕೆಗಳು ಉಗ್ರರ ಯತ್ನಗಳನ್ನು ವಿಫಲವಾಗುವಂತೆ ಮಾಡುತ್ತಿದೆ.