ಏಪ್ರಿಲ್ 9 ರಂದು ಲೋಕಸಭಾ ಕ್ಷೇತ್ರ ಉಪ ಚುನಾವಣೆ ವೇಳೆ ಕರ್ತವ್ಯನಿರ್ವಹಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಯೋಧರೊಬ್ಬ ಮೇಲೆ ಗುಂಪು ಗುಂಪಾಗಿ ಬಂದ ಕಾಶ್ಮೀರದ ಯುವಕರು ಹಲ್ಲೆ ನಡೆಸಿದ್ದರು. ಯೋಧನಿಗೆ ಕಾಲಿನಲ್ಲಿ ಒದೆಯಲಾಗಿತ್ತು. ತಲೆ ಮೇಲೆ ಹೊಡೆದಿದ್ದರು. ಯುವಕರು ಹಲ್ಲೆ ನಡೆಸುತ್ತಿದ್ದರೂ ಯೋಧ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನದಿಂದಲೇ ಸಾಗುತ್ತಿದ್ದರು. ಹಲ್ಲೆ ನಡೆಸುತ್ತಿದ್ದ ಯುವಕರು ಕೆಲ ಘೋಷಣೆಗಳನ್ನು ಕೂಗುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ, ಘಟನೆ ಸಂಬಂಧ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.