ಮಹಾರಾಷ್ಟ್ರ ಸರ್ಕಾರ ಆದಿವಾಸಿ ಜನಾಂಗದ ಮಕ್ಕಳಿಗಾಗಿ ಆಶ್ರಮ ಶಾಲೆಗಳನ್ನು ನಡೆಸುತ್ತಿದ್ದು ಇದರಲ್ಲಿ ಕೆಲಸ ಮಾಡುವ 12 ನೌಕರರು ಸೂಪರಿಂಟೆಂಡ್ ಆಗಿ ಬಡ್ತಿ ಪಡೆದಿದ್ದರು. ಆದರೆ ಪ್ರತಿಯೊಬ್ಬ ನೌಕರನಿಂದ 1 ಲಕ್ಷ ರುಪಾಯಿ ಲಂಚಕ್ಕೆ ಆದಿವಾಸಿ ಇಲಾಖೆಯ ಹೆಚ್ಚುವರಿ ಆಯುಕ್ತ ಐಎಎಸ್ ಅಧಿಕಾರಿ ಮಿಲಿಂಡ್ ಬಿ ಗಾವಾಡೆ(54) ಮತ್ತು ಡೆಪ್ಯೂಟಿ ಕಮಿಷನರ್ ಕಿರಣ್ ಸುಖ್ ಲಾಲ್ ಮಾಲಿ(39) ಬೇಡಿಕೆ ಇಟ್ಟಿದ್ದರು.