ಕೇಂದ್ರ ಸರ್ಕಾರದ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕುವ ಕುರಿತಂತೆ ನಾನು ಯಾವಾಗಲೂ ಬೆಂಬಲ ವ್ಯಕ್ತಪಡಿಸುತ್ತಿದ್ದೆ. ವಿಐಪಿ ಸಂಸ್ಕೃತಿಗಳು ಹೋಗಬೇಕಿದ್ದು, ಇದರಿಂದ ಸಚಿವರೂ ಕೂಡ ಸಾಮಾನ್ಯರೆಂಬ ಭಾವನೆಗಳು ಹುಟ್ಟುತ್ತವೆ. ಸಾಕಷ್ಟು ಸಚಿವರು ತಮ್ಮ ಕಾರುಗಳ ಮೇಲಿರುವ ಕೆಂಪು ದೀಪಗಳನ್ನು ತೆಗೆದುಹಾಕಿ ಬೆಂಬಲ ವ್ಯಕ್ತಪಡಿಸಿರುವುದು ನಿಜಕ್ಕೂ ಸಂತಸವನ್ನು ತಂದಿದೆ ಎಂದು ಹೇಳಿದ್ದಾರೆ.