ರವಿ ಶಂಕರ್ ಪ್ರಸಾದ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರವಿ ಶಂಕರ್ ಪ್ರಸಾದ್ ಅವರು ನೀಡಿರುವ ಹೇಳಿಕೆ ಸಾಂವಿಧಾನಿಕ ಪ್ರಕ್ರಿಯೆಯಂತೆ ಸರಿಯಾಗಿದೆ. ಒಮ್ಮೆ ಚುನಾವಣೆ ಮುಕ್ತಾಯಗೊಂಡ ಬಳಿಕ, ಜನಾದೇಶ ಸಿಗುತ್ತದೆ. ಮುಸ್ಲಿಮರಿಗೂ ಸೇರಿದಂತೆ ನಮ್ಮ ಸರ್ಕಾರ ಶೇ.100ರಷ್ಟು ಜನರಿಗಾಗಿ ಕೆಲಸ ಮಾಡುತ್ತದೆ. ಚುನಾವಣೆ ಬಳಿಕ ಯಾರು...ಯಾರಿಗೆ ಮತ ಹಾಕಿದರು...ಯಾರು ಮತ ಹಾಕಿಲ್ಲ ಎಂಬುದನ್ನು ನಾವು ನೋಡುವುದಿಲ್ಲ. ಹೀಗಾಗಿ ರವಿ ಶಂಕರ್ ಪ್ರಸಾದ್ ಅವರು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಹೇಳಿದ್ದಾರೆ.