ನಕ್ಸಲರಿಂದ ಮಾಧ್ವಿ ಅವರ ಕೊಲೆ ನಡೆದ ನಂತರ ಭಯಗೊಂಡ ಗ್ರಾಮಸ್ಥರು ಸಿಆರ್ ಪಿಎಫ್ ಯೋಧರನ್ನು ಸಂಪರ್ಕಿಸುವುದನ್ನೇ ನಿಲ್ಲಿಸಿ, ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೇ ನಕ್ಸಲರು ಗ್ರಾಮಸ್ಥರನ್ನು ಮುಂದಿಟ್ಟುಕೊಂಡು ತಮ್ಮ ರಕ್ಷಣೆ ಮಾಡಿಕೊಳ್ಳುವ ಭಾಗವಾಗಿ, ದಾಳಿ ನಡೆದ ದಿನದಂದು ಗ್ರಾಮಸ್ಥರ ಮೂಲಕವೂ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ.