ಜೈಲು ಸ್ಥಳಾಂತರ ಕುರಿತು ಸಹಾಯ ಮಾಡುವಂತೆ ಗಿಲಾನಿ ಮೊರೆ ಹೋಗಿದ್ದ ಉಗ್ರ ಅಫ್ಜಲ್ ಗುರು!

2001 ಸಂಸತ್ ಮೇಲಿನ ದಾಳಿಯ ರೂವಾರಿಯಾಗಿದ್ದ ಉಗ್ರ ಅಫ್ಜಲ್ ಗುರು ದೆಹಲಿಯ ತಿಹಾರ್ ಜೈಲಿನಿಂದ ಶ್ರೀನಗರ ಜೈಲಿಗೆ ಸ್ಥಳಾಂತರಗೊಳ್ಳಲು ಸಹಾಯ ಮಾಡುವಂತೆ ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಮೊರೆ...
ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಹಾಗೂ ಉಗ್ರ ಅಫ್ಜಲ್ ಗುರು (ಸಂಗ್ರಹ ಚಿತ್ರ)
ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಹಾಗೂ ಉಗ್ರ ಅಫ್ಜಲ್ ಗುರು (ಸಂಗ್ರಹ ಚಿತ್ರ)
ಶ್ರೀನಗರ: 2001 ಸಂಸತ್ ಮೇಲಿನ ದಾಳಿಯ ರೂವಾರಿಯಾಗಿದ್ದ ಉಗ್ರ ಅಫ್ಜಲ್ ಗುರು ದೆಹಲಿಯ ತಿಹಾರ್ ಜೈಲಿನಿಂದ ಶ್ರೀನಗರ ಜೈಲಿಗೆ ಸ್ಥಳಾಂತರಗೊಳ್ಳಲು ಸಹಾಯ ಮಾಡುವಂತೆ ಹುರಿಯತ್ ನಾಯಕ ಸಯ್ಯದ್ ಅಲಿ ಶಾ ಗಿಲಾನಿ ಮೊರೆ ಹೋಗಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 
ಕಾಶ್ಮೀರದಲ್ಲಿನ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಆರ್ಥಿಕ ನೆರವು ಪಡೆಯುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಪ್ರತ್ಯೇಕತಾವಾದಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. 
ಜೂ.3 2017ರಂದು ಪ್ರತ್ಯೇಕತಾವಾದಿ ಗಿಲಾನಿಯವರ ಅಳಿಯ ಅಲ್ತಾಫ್ ಅಹ್ಮದ್ ಶಾ ಅವರ ಮನೆ ಮೇಲೆಯೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಫ್ಜಲ್ ಗುರು ಗಿಲಾನಿಯವರಿಗೆ ಬರೆದಿರುವ ಪತ್ರವೊಂದು ದೊರಕಿದೆ. 
ಪತ್ರದಲ್ಲಿ ಅಫ್ಜಲ್ ದೆಹಲಿ ತಿಹಾರ್ ಜೈಲಿನಿಂದ ಶ್ರೀನಗರ ಜೈಲಿಕೆ ಸ್ಥಳಾಂತರಗೊಳ್ಳಲು ಸಹಾಯ ಮಾಡುವಂತೆ ಕೇಳಿರುವುದು ತಿಳಿದುಬಂದಿದೆ. 
ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವುದು ನನಗೆ ಬೇಕಿಲ್ಲ. ವಿಧಾನಸಭೆಯಲ್ಲಿ ನಿರ್ಣಯಗಳನ್ನು ಮಂಡಿಸುವ ಬದಲಿಗೆ ಜೈಲು ಸ್ಥಳಾಂತರ ಕುರಿತು ಸುಪ್ರೀಂಕೋರ್ಟ್ ಗೆ ಪ್ರತಿಕ್ರಿಯೆ ನೀಡುವಂತೆ ಒಮರ್ ಅಬ್ದುಲ್ಲಾ (ಆಂದಿನ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ) ಅವರ ಬಳಿ ಮನವಿ ಮಾಡಿಕೊಳ್ಳಿ ಎಂದು ಪತ್ರದಲ್ಲಿ ಅಫ್ಜಲ್ ಹೇಳಿದ್ದಾನೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com