ತಾಜ್‌ಮಹಲ್ ಸಮೀಪದ ಅನಧಿಕೃತ ರೆಸ್ಟೋರೆಂಟ್‌ಗಳ ತೆರವಿಗೆ ಯುಪಿ ಸರ್ಕಾರಕ್ಕೆ ಎನ್‌ಜಿಟಿ ಆದೇಶ

ಆಗ್ರದ ಜಗತ್ ಪ್ರಸಿದ್ಧ ತಾಜ್ ಮಹಲ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಗಳನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ...
ತಾಜ್‌ಮಹಲ್
ತಾಜ್‌ಮಹಲ್
Updated on
ನವದೆಹಲಿ: ಆಗ್ರದ ಜಗತ್ ಪ್ರಸಿದ್ಧ ತಾಜ್ ಮಹಲ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಗಳನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 
ಗ್ರೀನ್ ಟ್ರಿಬ್ಯೂನಲ್ ತಾಜ್ ಮಹಲ್ ಸುತ್ತಲಿನ ಪ್ರದೇಶದ ಪರಿಸರದ ವಿಷಯದಲ್ಲಿ ರಾಜಿಯಾಗಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಕೂಡಲೇ ರೆಸ್ಟೋರೆಂಟ್ ಗಳನ್ನು ಕೆಡವಿ ತಾಜ್ ಮಹಲ್ ಸುತ್ತಮುತ್ತ ಮರಗಳನ್ನು ನೋಡಲು ಪ್ರೋತ್ಸಾಹಿಸಿ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಎನ್‌ಜಿಟಿ ಸೂಚಿಸಿದೆ. 
ಜಗತ್ ಪ್ರಸಿದ್ಧ ತಾಜ್ ಮಹಲ್ ಪರಿಸರ-ಸೂಕ್ಷ್ಮ ತಾಜ್ ಟ್ರಾಪೇಜಿಯಮ್ ವಲಯ(ಟಿಟಿಝಡ್) ಸುತ್ತ ಮತ್ತು ಮರಗಳನ್ನು ನೆಟ್ಟಿರುವ ಬಗ್ಗೆ ಮಾಹಿತಿ ನೀಡುವಂತೆ ಈ ಹಿಂದಿನ ವಿಚಾರಣೆ ವೇಳೆ ಎನ್‌ಜಿಟಿ ಆಗ್ರ ವಿಭಾಗೀಯ ಕಮೀಷನರ್ ಅವರಿಗೆ ಸೂಚಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com