ಈ ಕುರಿತಂತೆ ಮಾತನಾಡಿರುವ ಜೆಡಿಯು ನಾಯಕ ಶರದ್ ಯಾದವ್ ಅವರು ,ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವೆಂಕಯ್ಯ ನಾಯ್ಡು ಅವರು ಗೆಲವು ಸಾಧಿಸಿರುವುದಕ್ಕೆ ಈ ಮೂಲಕ ಶುಭಾಶಯಗಳನ್ನು ಹೇಳಲು ಇಚ್ಛಿಸುತ್ತೇನೆ. ನಾಯ್ಡು ಅವರು ರಾಜ್ಯಸಭೆಯ ಹಳೆಯ ಸದಸ್ಯರಾಗಿದ್ದು, ನಾಯ್ಡು ಅವರನ್ನು ಇಂತಹ ಉನ್ನತ ಸ್ಥಾನದಲ್ಲಿ ನೋಡುತ್ತಿರುವುದು ರಾಜ್ಯಸಭೆಯ ಸಾಧನೆಯಾಗಿದೆ ಎಂದು ಹೇಳಿದ್ದಾರೆ.