ಇನ್ನು ತಮ್ಮ ವಿರುದ್ಧ ಹಲವು ಮಹಿಳಾ ಸಂಘಟನೆಗಳು, ಬಿಜೆಪಿಯ ಸಂಸದರೇ ಧ್ವನಿ ಎತ್ತಿದ್ದರಿಂದ ಸುಭಾಷ್ ಬರಾಲಾ ಅವರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ನಂತರ ಮಾತನಾಡಿದ ಮನೋಹರ್ ಲಾಲ್ ಖಟ್ಟರ್ ಅವರು ಪ್ರಕರಣದಲ್ಲಿ ಸುಭಾಷ್ ಬರಾಲಾ ಅವರ ಯಾವುದೇ ಒಳಗೊಳ್ಳುವಿಕೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಪ್ರಕರಣ ಸಂಬಂಧ ಆರೋಪ ಸಾಬೀತಾದರೆ ಆರೋಪಿಗೆ ಶಿಕ್ಷೆಯಾಗಲಿದೆ ಎಂದರು.