ಶುಕ್ರವಾರದಂದು ಬಾಬ್ರಿ ಮಸೀದಿ-ರಾಮ ಮಂದಿರ ಪ್ರಕರಣದ ವಿಚಾರಣೆ ನಡೆಯಲಿದ್ದು, ಇದೇ ವೇಳೆ ಬಾಬ್ರಿ ಮಸೀದಿಯ ಒಡೆತನವನ್ನು ಸುನ್ನಿ ಪಂಗಡಕ್ಕೆ ನೀಡಲಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಬೇಕೆಂದು ಮನವಿ ಸಲ್ಲಿಸಿದೆ. ಅಷ್ಟೇ ಅಲ್ಲದೇ ಅರ್ಜಿಯಲ್ಲಿ ಮಸೀದಿಯನ್ನು ಬಾಬರನ ಸಚಿವ ಅಬ್ದುಲ್ ಮೀರ್ ಬಾಖಿ ತನ್ನ ಸ್ವಂತ ಖರ್ಚಿನಿಂದ ನಿರ್ಮಿಸಿದ್ದ, ಮೀರ್ ಬಾಖಿ ಶಿಯಾ ಪಂಗಡಕ್ಕೆ ಸೇರಿದ್ದ, ಆತ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಶಿಯಾ ವಕ್ಫ್ ಮಂಡಳಿ ಹೇಳಿದೆ.