ಇದರಂತೆ ಮತ್ತೊಬ್ಬರು ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು ಮಾತನಾಡಿ, ಗಡಿಯಲ್ಲಿ ಸದಾ ಕಾಲ ಬೆದರಿಕೆಗಳು ಹಾಗೂ ಎಚ್ಚರಿಕೆಗಳನ್ನು ಎದುರಿಸುತ್ತಲೇ ಇರುತ್ತೇವೆ. ಯೋಧರನ್ನು ಕಳೆದುಕೊಳ್ಳುವುದು ಹೃದಯ ವಿದ್ರಾವಕ ಸಂಗತಿ. ಒಂದೆಡೆ ಯೋಧರನ್ನು ಕಳೆದುಕೊಳ್ಳುತ್ತಿದ್ದರೂ, ಭಾರತೀಯ ಸೇನೆ ಸದಾಕಾಲ ಪಾಕಿಸ್ತಾನಕ್ಕೆ ನಾವು ಸಿದ್ಧರಿದ್ದೇವೆಂಬ ಉತ್ತರವನ್ನೇ ನೀಡುತ್ತಲಿದೆ. ಭಾರತೀಯ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುವುದು ಹೊಸದೇನಲ್ಲ ಎಂದಿದ್ದಾರೆ.