ನಂಬಿಕೆ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸುವುದು ಸ್ವೀಕಾರಾರ್ಹವಲ್ಲ: ಮೋದಿ
ಗೋಹತ್ಯೆ ಕುರಿತಂತೆ ಮಾತನಾಡಿರುವ ಮೋದಿಯವರು, ನಂಬಿಕೆಗಳ ಹೆಸರಿನಲ್ಲಿ ದೇಶದಲ್ಲಿ ಹಿಂಸಾಚಾರ ಸೃಷ್ಟಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಂದಿದ್ದಾರೆ.
ಒಬ್ಬ ನಂಬಿಕೆಗಳ ಹೆಸರಿನಲ್ಲಿ ಹಿಂಸಾಚಾರ ಸೃಷ್ಟಿಸುವುಗು ಸಂತಸವನ್ನು ತರುವುದಿಲ್ಲ. ಭಾರತದನ್ನು ಇದನ್ನು ಒಪ್ಪಲು ಸಾಧ್ಯವೂ ಇಲ್ಲ. ಶಾಂತಿ, ಐಕತೆ ಹಾಗೂ ಸೌಹಾರ್ದತೆಯೆಂದರೆ ಭಾರತ. ಜಾತಿ ಮತ್ತು ಕೋಮುವಾದ ನಮಗೆ ಸಹಾಯಕ್ಕೆ ಬರುವುದಿಲ್ಲ. ಜಾತಿ ಮತ್ತು ಕೋಮುವಾದವೆಂಬ ವಿಷ ಎಂದಿಗೂ ದೇಶಕ್ಕೆ ಪ್ರಯೋಜನವಾಗಲಾರದು. ಇಂತಹವುಗಳನ್ನು ಸಮರ್ಥಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.