ಭಯೋತ್ಪಾದಕರಿಗೆ ಹಣಕಸಿನ ನೆರವು: ಕಾಶ್ಮೀರಿ ಉದ್ಯಮಿ ಎನ್ಐಎ ವಶಕ್ಕೆ

ಕಾಶ್ಮೀರದ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿರುವ ಆರೋಪ ಎದುರಿಸುತ್ತಿರುವ ಕಾಶ್ಮೀರದ ಉದ್ಯಮಿ ಝಹೂರ್ ವಾಟಾಳಿಯನ್ನು 10 ದಿನಗಳ ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ.
ಎನ್ಐಎ
ಎನ್ಐಎ
Updated on
ನವದೆಹಲಿ: ಕಾಶ್ಮೀರದ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿರುವ ಆರೋಪ ಎದುರಿಸುತ್ತಿರುವ ಕಾಶ್ಮೀರದ ಉದ್ಯಮಿ ಝಹೂರ್ ವಾಟಾಳಿಯನ್ನು 10 ದಿನಗಳ ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ. 
ಜಿಲ್ಲಾ ನ್ಯಾಯಾಧೀಶರಾದ ಪೂನಂ ಎ ಬಂಬಾ ಎನ್ಐಎ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ತನಿಖೆಯ ಭಾಗವಾಗಿ ಆರೋಪಿಯನ್ನು ಹಲವು ಪ್ರದೇಶಗಳಿಗೆ ಕರೆದೊಯ್ಯಬೇಕಿದೆ ಎಂಬ ಎನ್ಐಎ ವಾದವನ್ನು ಪುರಸ್ಕರಿಸಿ ಝಹೂರ್ ವಾಟಾಳಿಯನ್ನು 10 ದಿನಗಳ ಎನ್ಐಎ ವಶಕ್ಕೆ ನೀಡಿ ಆದೇಶಿಸಿದ್ದಾರೆ. 
ಎನ್ಐಎ ಝಹೂರ್ ವಾಟಾಳಿಯನ್ನು 2 ವಾರಗಳ ವಶಕ್ಕೆ ಒಪ್ಪಿಸಬೇಕೆಂದು ಕೋರ್ಟ್ ಗೆ ಮನವಿ ಮಾಡಿತ್ತದರೂ ಕೋರ್ಟ್ ಎನ್ಐಎ ಮನವಿಯನ್ನು ಪರಿಗಣಿಸದೇ 10 ದಿನಗಳ ವಶಕ್ಕೆ ಒಪ್ಪಿಸಿದೆ. ಭಯೋತ್ಪಾದಕರಿಗೆ ಸಂದಾಯವಾಗುತ್ತಿರುವ ಹಣಕಾಸಿನ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಉದ್ಯಮಿ ವಾಟಾಳಿ ಅವರನ್ನು ಬಂಧಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com