ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೂಗು ಕತ್ತರಿಸಿದ ಕಿರಾತಕರು

ಮನೆ ಕೆಲಸ ಹಾಗೂ ಜಮೀನಿನ ಕೆಲಸ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯ ಮೂಗು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಾಗರ: ಮನೆ ಕೆಲಸ ಹಾಗೂ ಜಮೀನಿನ ಕೆಲಸ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯ ಮೂಗು ಕತ್ತರಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
ನರೇಂದ್ರ ಸಿಂಗ್ ಮತ್ತು ಆತನ ತಂದೆ ಸಹಬ್ ಸಿಂಗ್ ತಮ್ಮ ಮನೆ ಕೆಲಸ ಮಾಡಲು ನಿರಾಕರಿಸಿದ ಮಹಿಳೆ ಮತ್ತು ಆಕೆಯ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾಳಿ ನಡೆಸಲಾಗಿದೆ
ಈ ಸಂಬಂಧ ಮಧ್ಯ ಪ್ರದೇಶ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುವಂತೆ ಸಾಗರ ಎಸ್ ಪಿ  ಸೂಚಿಸಿದೆ.
ಈ ವಿಷಯ ಗಂಭೀರವಾಗಿದ್ದು, ಮಹಿಳೆಯನ್ನು ಬಲವಂತವಾಗಿ ಜೀತ ಕಾರ್ಮಿಕಳನ್ನು ಮಾಡಲು ಪ್ರಯತ್ನಿಸಲಾಗಿದೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳೂಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಲತಾ ವಾಂಖೆಡೆ ಹೇಳಿದ್ದಾರೆ.
ಬುಧವಾರ ಮಹಿಳಾ ಆಯೋಗ ಆಯೋಜಿಸಿದ್ದ ಶಿಬಿರಕ್ಕೆ ಆಗಮಿಸಿದ ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ  ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com