ದೇಶ
ಮಧ್ಯರಾತ್ರಿ ಕಿರಣ್ ಬೇಡಿ ಬೈಕ್ ರೈಡ್: ನಗರ ಸುರಕ್ಷತೆ ಅರಿಯಲು ರಹಸ್ಯ ಸಂಚಾರ!
ರಾತ್ರಿಯ ವೇಳೆಯಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರು ಗಸ್ತು ತಿರುಗುತ್ತಾರೆ. ಆದರೆ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ, ಮಾರುವೇಷದಲ್ಲಿ ತಾವೇ ಸ್ವತಃ ಗಸ್ತು ತಿರುಗುವ ಮೂಲಕ ಮಹಿಳೆಯರ...
ಪುದುಚೇರಿ; ರಾತ್ರಿಯ ವೇಳೆಯಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರು ಗಸ್ತು ತಿರುಗುತ್ತಾರೆ. ಆದರೆ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ, ಮಾರುವೇಷದಲ್ಲಿ ತಾವೇ ಸ್ವತಃ ಗಸ್ತು ತಿರುಗುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ.
ಚೂಡಿದಾರ ತೊಟ್ಟು, ಮುಖವನ್ನು ದುಪ್ಪಟ್ಟಾದಿಂದ ಮುಚ್ಚಿಕೊಂಡು, ದ್ವಿಚಕ್ರ ವಾಹನವೊಂದರ ಹಿಂದೆ ಕುಳಿತು ಮಧ್ಯರಾತ್ರಿಯ ವೇಳೆ ಪುದುಚೇರಿಯ ರಸ್ತೆಗಳನ್ನು ಸುತ್ತಿದ್ದಾರೆ.
ನಗರ ಸುರಕ್ಷತೆ ಅರಿಯಲು ರಹಸ್ಯ ಬೈಕ್ ನಲ್ಲಿ ರಹಸ್ಯ ಸಂಚಾರ ಮಾಡಿದ ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಿರಣ್ ಬೇಡಿ, ಪುದುಚೇರಿ ಮಹಿಳೆಯರಿಗೆ ಸುರಕ್ಷಿತ ತಾಣವಾಗಿದೆ. ಆದರೆ, ಕೆಲವೊಂದು ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಸೂಚಿಸಲಿದ್ದೇನೆ ಎಂದು ಹೇಳಿದ್ದಾರೆ.