ದುರ್ಘಟನೆ ನಡೆದ ಸ್ಥಳದಲ್ಲಿ ರೈಲು ಮಾರ್ಗ ರಿಪೇರಿ ನಡೆದಿತ್ತು. ಚಾಲಕನಿಗೆ ನೀಡಿದ ಸೂಚನೆ ಅನ್ವಯ ರೈಲು ಸಾಗುವ ವೇಳೆಗೆ ಅದು ಮುಗಿದಿರಬೇಕಿತ್ತು. ಆಧರೆ, ರೈಲು ಆಗಮಿಸಿದಾಗ ಇನ್ನೂ ರಿಪೇರಿ ಕಾರ್ಯ ಮುಗಿದಿರಲಿಲ್ಲ. ಹಳಿ ರಿಪೇರಿ ಸಿಬ್ಬಂದಿ ಸ್ಥಳದಲ್ಲಿಯೇ ರಿಪೇರಿ ಸಲಕರಣೆಗಳನ್ನು ಬಿಟ್ಟು ಅರ್ಧಂಬರ್ಧ ಕೆಲಸ ಮಾಡಿ ಹೋಗಿದ್ದರು. ಇದರಿಂದಾಗಿ ರೈಲು ತುಂಡಾದ ಹಳಿ ಮೇಲೇ ಓಡಿತೆಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದ ಚಾಲಕ ಹಠಾತ್ತಾಗಿ ರೈಲಿನ ಬ್ರೇಕ್ ಹಾಕಿದ್ದರಿಂದ ರೈಲು ಹಳಿತಪ್ಪಿತು ಎಂದು ಪ್ರಾಥಮಿಕ ತನಿಖಾ ವರದಿಗಳಿಂದ ತಿಳಿದುಬಂದಿದೆ.