ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದರೂ, ಪುರೋಹಿತ್ ಅವರು ಜೈಲಿನಿಂದ ಬಿಡುಗೆಯಾಗುವ ಭಾಗ್ಯ ಪಡೆದಿರಲಿಲ್ಲ. ಆದರೆ, ಜಾಮೀನಿನ ನಿಯಾವಳಿಗಳು ನಿನ್ನೆ ಮುಕ್ತಾಯವಾಗದಿರುವುದರಿಂದಾಗಿ ಕರ್ನಲ್ ಅವರ ಬಿಡುಗಡೆ ವಿಳಂಬವಾಗಿತ್ತು. ಇದೀಗ ಎಲ್ಲಾ ನಿಯಾಮಾವಳಿಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.