ರಾಮ್ ರಹೀಮ್ ಅತ್ಯಾಚಾರ ತೀರ್ಪು; ಹರಿಯಾಣದಲ್ಲಿ ಪತ್ರಕರ್ತರ ಮೇಲೆ ಡೇರಾ ಗೂಂಡಾಗಳಿಂದ ದಾಳಿ

ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ ಜೈಲಿ ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಬೆಂಬಲಿಗರು ಹರಿಯಾಣ ರಾಜ್ಯದಲ್ಲಿ ನಡೆಸುತ್ತಿರುವ ಹಿಂಸಾಚಾರ ಮುಂದುವರೆದಿದ್ದು, ಸಿರ್ಸಾದಲ್ಲಿ ಪತ್ರಕರ್ತರ ವಾಹನದ...
ರಾಮ್ ರಹೀಮ್ ಅತ್ಯಾಚಾರ ತೀರ್ಪು; ಹರಿಯಾಣದಲ್ಲಿ ಪತ್ರಕರ್ತರ ಮೇಲೆ ಡೇರಾ ಗೂಂಡಾಗಳಿಂದ ದಾಳಿ
ರಾಮ್ ರಹೀಮ್ ಅತ್ಯಾಚಾರ ತೀರ್ಪು; ಹರಿಯಾಣದಲ್ಲಿ ಪತ್ರಕರ್ತರ ಮೇಲೆ ಡೇರಾ ಗೂಂಡಾಗಳಿಂದ ದಾಳಿ
Updated on
ಸಿರ್ಸಾ: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ ಜೈಲಿ ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಬೆಂಬಲಿಗರು ಹರಿಯಾಣ ರಾಜ್ಯದಲ್ಲಿ ನಡೆಸುತ್ತಿರುವ ಹಿಂಸಾಚಾರ ಮುಂದುವರೆದಿದ್ದು, ಸಿರ್ಸಾದಲ್ಲಿ ಪತ್ರಕರ್ತರ ವಾಹನದ ಮೇಲೆ ದಾಳಿ ನಡೆಸಿದ್ದಾರೆಂದು ಭಾನುವಾರ ವರದಿಗಳು ತಿಳಿಸಿವೆ. 
ರಾಮ್ ರಹೀಮ್ ಅವರ ವಿರುದ್ಧ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಸಿರ್ಸಾದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನಲೆಯಲ್ಲಿ ಸಿರ್ಸಾದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ಇಂದೂ ಕೂಡ ಸಿರ್ಸಾದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಗುರ್ಮಿತ್ ಅವರ ಬೆಂಬಲಿಗರು ಮಾತ್ರ ತಮ್ಮ ಹಿಂಸಾಚಾರವನ್ನು ಮುಂದುವರೆಸಿದ್ದಾರೆ. 
ಪತ್ರಕರ್ತರ ವಾಹನಗಳ ಮೇಲೆ ಡೇರಾ ಗುಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಕೆಲ ಮಾಧ್ಯಮಗಳ ವಾಹನಗಳಿಗೆ ಬೆಂಕಿ ಹೆಚ್ಚು ದೌರ್ಜನ್ಯ ಎಸಗಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com