ಆಮ್ಲಜನಕ ಪೂರೈಕೆಯಲ್ಲಿ ಕೊರತೆಯುಂಟಾಗಿದ್ದರಿಂದಲೇ 70 ಮಕ್ಕಳು ಸಾವನ್ನಪ್ಪಿರುವುದಾಗಿ ಎಫ್ಐಆರ್ ನಲ್ಲಿ ದಾಲಿಸಲಾಗಿದೆ. ಪ್ರಸಕ್ತ ವರ್ಷ 2017-18 ಸಾಲನಲ್ಲಿ ಆಸ್ಪತ್ರೆಗೆ ಸರ್ಕಾರ ರೂ. 454 ಲಕ್ಷ ನೀಡಿದ್ದು, ಇದರಲ್ಲಿ ರೂ.63.65 ಲಕ್ಷವನ್ನು ಏಪ್ರಿಲ್ ತಿಂಗಳಿನಲ್ಲಿ ಪುಪ್ಪ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಗೆ ನೀಡಲಾಗಿದೆ. ಇದಲ್ಲದೆ ಘಟನೆ ನಡೆದಾಗ ಆ.10 ರಂದು ಪ್ರಾಂಶುಪಾಲರಾಗಿದ್ದ ಮಿಶ್ರಾ ಅವರು ಕರ್ತವ್ಯದಲ್ಲಿರದೆ ಗೈರು ಹಾಜರಾಗಿದ್ದರು. ಇದರಿಂದ ಅವರು ಪಿತೂರಿ ನಡೆಸಿರುವುದು ಸಾಬೀತಾಗಿದೆ ಎಂದು ಎಫ್ಐಆರ್ ಹೇಳಲಾಗಿದೆ.