ರೈಲು ಅಪಘಾತ ಸಂಭವಿಸಿ ಪ್ರತಿನಿತ್ಯ ಪ್ರಯಾಣಿಕರು ಅಪಾಯಕ್ಕೆ ಸಿಲುಕಿ ಹಾಕಿಕೊಳ್ಳುತ್ತಿದ್ದರೂ, ರೈಲ್ವೇ ಇಲಾಖೆ ಮಾತ್ರ ಜವಾಬ್ದಾರಿಯನ್ನೂ ಹೊತ್ತುಕೊಳ್ಳುತ್ತಿಲ್ಲ, ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಸರಣಿಯಾಗಿ ರೈಲ್ವೇ ದುರಂತಗಳು ಸಂಭವಿಸುತ್ತಿದ್ದು, ಸುರೇಶ್ ಪ್ರಭು ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು. ಮತ್ತು ರೈಲ್ವೇ ಸುರಕ್ಷತೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಕ್ತ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.