ಗೋರಖ್'ಪುರದಲ್ಲಿ ಮತ್ತೆ ಘೋರ ದುರಂತ: ಮುಂದುವರೆದ ಸಾವಿನ ಮೃದಂಗ, 48 ಗಂಟೆಗಳಲ್ಲಿ 7 ಮಕ್ಕಳ ಸಾವು

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್'ಪುರದಲ್ಲಿ ಸಂಭವಿಸಿದ ಆಸ್ಪತ್ರೆ ದುರಂತ ಪ್ರಕರಣ ಸಂಬಂಧ ಸಾವಿನ ಮೃದಂಗ ಮತ್ತೆ ಮುಂದುವರೆದಿದ್ದು, 48 ಗಂಟೆಗಳಲ್ಲಿ 7 ಮಕ್ಕಳು ಸಾವನ್ನಪ್ಪಿರುವುದಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗೋರಖ್'ಪುರ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್'ಪುರದಲ್ಲಿ ಸಂಭವಿಸಿದ ಆಸ್ಪತ್ರೆ ದುರಂತ ಪ್ರಕರಣ ಸಂಬಂಧ ಸಾವಿನ ಮೃದಂಗ ಮತ್ತೆ ಮುಂದುವರೆದಿದ್ದು, 48 ಗಂಟೆಗಳಲ್ಲಿ 7 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. 
ಬಾಬಾ ರಾಘವ್ ದಾಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ 80 ಮಕ್ಕಳ ಪೈಕಿ ಆಗಸ್ಟ್ ತಿಂಗಳ ಮಧ್ಯಂತರದಲ್ಲಿ 7 ಮಕ್ಕಳು ಮಿದುಳಿನ ಉರಿಯೂತದಿಂದ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 
ಬಿಆರ್'ಡಿ ಆಸ್ಪತ್ರೆಯಲ್ಲಿ ಆಗಸ್ಟ್ 1 ರಿಂದ ಇಲ್ಲಿಯವರೆಗೂ ಸುಮಾರು 290 ಮಕ್ಕಳು ಸಾವನ್ನಪ್ಪಿದ್ದು, ಈ ಪೈಕಿ 77 ಮಕ್ಕಳು ಮಿದುಳಿನ ಉರಿಯೂತಕ್ಕೆ ಕಾರಣವಾಗುವ ಎನ್'ಸಫಲಿಟೀಸ್ ಎನ್ನುವ ಮಾರಣಾಂತಿಕ ಕಾಯಿಲೆಗಳಿಂದ ಬಲಿಯಾಗುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com