ಗೋರಖ್'ಪುರದಲ್ಲಿ ಮತ್ತೆ ಘೋರ ದುರಂತ: ಮುಂದುವರೆದ ಸಾವಿನ ಮೃದಂಗ, 48 ಗಂಟೆಗಳಲ್ಲಿ 7 ಮಕ್ಕಳ ಸಾವು

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್'ಪುರದಲ್ಲಿ ಸಂಭವಿಸಿದ ಆಸ್ಪತ್ರೆ ದುರಂತ ಪ್ರಕರಣ ಸಂಬಂಧ ಸಾವಿನ ಮೃದಂಗ ಮತ್ತೆ ಮುಂದುವರೆದಿದ್ದು, 48 ಗಂಟೆಗಳಲ್ಲಿ 7 ಮಕ್ಕಳು ಸಾವನ್ನಪ್ಪಿರುವುದಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಗೋರಖ್'ಪುರ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಕ್ಷೇತ್ರ ಗೋರಖ್'ಪುರದಲ್ಲಿ ಸಂಭವಿಸಿದ ಆಸ್ಪತ್ರೆ ದುರಂತ ಪ್ರಕರಣ ಸಂಬಂಧ ಸಾವಿನ ಮೃದಂಗ ಮತ್ತೆ ಮುಂದುವರೆದಿದ್ದು, 48 ಗಂಟೆಗಳಲ್ಲಿ 7 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. 
ಬಾಬಾ ರಾಘವ್ ದಾಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ 80 ಮಕ್ಕಳ ಪೈಕಿ ಆಗಸ್ಟ್ ತಿಂಗಳ ಮಧ್ಯಂತರದಲ್ಲಿ 7 ಮಕ್ಕಳು ಮಿದುಳಿನ ಉರಿಯೂತದಿಂದ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 
ಬಿಆರ್'ಡಿ ಆಸ್ಪತ್ರೆಯಲ್ಲಿ ಆಗಸ್ಟ್ 1 ರಿಂದ ಇಲ್ಲಿಯವರೆಗೂ ಸುಮಾರು 290 ಮಕ್ಕಳು ಸಾವನ್ನಪ್ಪಿದ್ದು, ಈ ಪೈಕಿ 77 ಮಕ್ಕಳು ಮಿದುಳಿನ ಉರಿಯೂತಕ್ಕೆ ಕಾರಣವಾಗುವ ಎನ್'ಸಫಲಿಟೀಸ್ ಎನ್ನುವ ಮಾರಣಾಂತಿಕ ಕಾಯಿಲೆಗಳಿಂದ ಬಲಿಯಾಗುತ್ತಿದ್ದಾರೆಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com