ಜೈಲು ಸೇರಿದಾಗಿನಿಂದಲೂ ರಾಮ್ ರಹೀಮ್ ಮನಸ್ಸಿನಲ್ಲೇ ಗೊಣಗುತ್ತಿದ್ದರು. ಜೈಲು ಸೇರುವಂತಹ ಪರಿಸ್ಥಿತಿ ಎದುರಿಸಲು ನಾನೇನು ಮಾಡಿದೆ... ದೇವರೇ...? ಎಂದು ಹೇಳುತ್ತಲೇ ಇದ್ದರು. ಸರಿಯಾದ ಊಟ, ನಿದ್ರೆಯನ್ನು ಮಾಡುತ್ತಿರಲಿಲ್ಲ. ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
5 ದಿನಗಳ ಕಾಲ ನಾನು ರಾಮ್ ರಹೀಮ್ ಜೊತೆಗಿದ್ದೆ. ಜೈಲು ಸಿಬ್ಬಂದಿ ನೀಡುತ್ತಿದ್ದ ಆಹಾರವನ್ನು ತಿನ್ನುತ್ತಿರಲಿಲ್ಲ. ಕೇವಲ ಹಾಲು, ಟೀ ಹಾಗೂ ಬಿಸ್ಕೆಟ್ ಮಾತ್ರವೇ ತಿನ್ನುತ್ತಿದ್ದರು.
ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುತ್ತಿದ್ದಂತೆಯೇ ರಾಮ್ ರಹೀಮ್ ಗೆ ನಿಲ್ಲಿಲು ಸಾಧ್ಯವಾಗದೆ ನೆಲಕ್ಕೆ ಕುಸಿದಿದ್ದರು. ನನ್ನನ್ನು ಗಲ್ಲಿಗೇರಿಸಿ. ನನಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದರು ಎಂದು ಸ್ವದೇಶ್ ಕಿರಾದ್ ವಿವರಿಸಿದ್ದಾರೆ.