ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಹಡಗು, ಡಾರ್ನಿಯರ್ ವಿಮಾನ, ಹೆಲಿಕಾಫ್ಟರ್ ಗಳನ್ನು ಬಳಸಿ ಶೋಧಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಐಎನ್ಎಸ್ ನಿರೀಕ್ಷಕ್, ಐಎನ್ಎಸ್ ಜಮುನಾ ಹಾಗೂ ಐಎನ್ಎಸ್ ಸಾಗರ್ ಧ್ವನಿ ಗಳು ಕೇರಳದಲ್ಲಿ ಶೋಧಕಾರ್ಯಾಚರಣೆಗೆ ನೆರವಾಗಿದ್ದು, ಐಎನ್ಎಸ್ ಶಾರ್ದಾ ಹಾಗೂ ಶಾರ್ದೂಲ್ ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಬಳಕೆಯಾಗಿವೆ.