ಲವ್ ಜಿಹಾದ್ ಸೇಡು: ವ್ಯಕ್ತಿಯ ಹತ್ಯೆ ಮಾಡಿ ಬೆಂಕಿಗೆ ಆಹುತಿ!

ಕಾರ್ಮಿಕನನ್ನು ಹೊಡೆದು ಹತ್ಯೆ ಮಾಡಿ ಬೆಂಕಿಗೆ ಹಾಕಿರುವ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಲವ್ ಜಿಹಾದ್ ಸೇಡು: ವ್ಯಕ್ತಿಯ ಹತ್ಯೆ ಮಾಡಿ ಬೆಂಕಿಗೆ ಆಹುತಿ!
ಲವ್ ಜಿಹಾದ್ ಸೇಡು: ವ್ಯಕ್ತಿಯ ಹತ್ಯೆ ಮಾಡಿ ಬೆಂಕಿಗೆ ಆಹುತಿ!
ಉದಯ್ ಪುರ: ಕಾರ್ಮಿಕನನ್ನು ಹೊಡೆದು ಹತ್ಯೆ ಮಾಡಿ ಬೆಂಕಿಗೆ ಹಾಕಿರುವ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. 
ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಥಳಿಸಿ ಲವ್ ಜಿಹಾದ್ ಬಗ್ಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮೃತದೇಹವನ್ನು ಸುಡಲಾಗುತ್ತಿರುವುದು ನೈಜ ದೃಶ್ಯ ಎಂದು ಪೊಲೀಸರು ಹೇಳಿದ್ದು, ಆರೋಪಿಯನ್ನು ಶಂಭು ಲಾಲ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಎಸ್ಐ ಟಿ ಪೊಲೀಸರು ಬಂಧಿಸಲಾಗಿದೆ.    
ಕೊಡಲಿಯಿಂದ ಕಾರ್ಮಿಕನನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಲವ್ ಜಿಹಾದ್ ಕೊನೆಯಾಗದಿದ್ದಲ್ಲಿ ಪ್ರತಿಯೊಬ್ಬ ಭಾರತೀಯನೂ ಹೀಗೆಯೇ ಮಾಡುತ್ತಾನೆ ಎಂಬ ಎಚ್ಚರಿಕೆ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com