ಹಿಮಪಾತ: ಕಾಶ್ಮೀರದ ಗುರೇಜ್ ಸೆಕ್ಟರ್ ನಲ್ಲಿ ಮೂವರು ಯೋಧರು ನಾಪತ್ತೆ, ಶೋಧ ಕಾರ್ಯ ಆರಂಭ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲ ಋತುವಿನ ಮೊದಲ ಹಿಮಪಾತವಾಗಿದ್ದು, ಹಿಮಪಾತವಾದ ಮೊದಲ ದಿನವೇ ಭಾರತೀಯ ಸೇನೆಯ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದ ಡೋಡಾ ಮತ್ತು ಪೀರ್ ಪಂಜಲ್ ರೇಂಜ್ ನಲ್ಲಿ ಭಾರಿ ಹಿಮಪಾತ
ಕಾಶ್ಮೀರದ ಡೋಡಾ ಮತ್ತು ಪೀರ್ ಪಂಜಲ್ ರೇಂಜ್ ನಲ್ಲಿ ಭಾರಿ ಹಿಮಪಾತ
Updated on
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲ ಋತುವಿನ ಮೊದಲ ಹಿಮಪಾತವಾಗಿದ್ದು, ಹಿಮಪಾತವಾದ ಮೊದಲ ದಿನವೇ ಭಾರತೀಯ ಸೇನೆಯ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ನಲ್ಲಿ ಪಹರೆ ಕಾಯುತ್ತಿದ್ದ ಮೂವರು ಯೋಧರು ನಾಪತ್ತೆಯಾದ ಕುರಿತು ಸ್ವತಃ ಭಾರತೀಯ ಸೇನಾಧಿಕಾರಿಗಳು ಮಾಹಿತಿ ನೀಡಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ಗುರೇಜ್  ಸೆಕ್ಟರ್ ನ ಬಕ್ತೂರ್ ಪೋಸ್ಟ್ ಬಳಿ ಹಿಮಪಾತವಾಗಿದ್ದು, ಭಾರಿ ಹಿಮದ ಗೆಡ್ಡೆಗಳು ಭಾರತೀಯ ಪೋಸ್ಟ್ ಗಳ ಕ್ಯಾಂಪ್ ಮೇಲೆ ಬಿದ್ದಿವೆ. ಪರಿಣಾಮ ಅಲ್ಲಿ ಕರ್ತವ್ಯ ನಿರತರಾಗಿದ್ದ ಮೂವರು ಯೋಧರು ನಾಪತ್ತೆಯಾಗಿದ್ದು, ಪ್ರಸ್ತುತ  ನಾಪತ್ತೆಯಾಗಿರುವ ಯೋಧರು ಹಿಮಪಾತದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ಸೇನೆಯ ನುರಿತ ತಜ್ಞರು ನಾಪತ್ತೆಯಾಗಿರುವ ಯೋಧರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com