ಭಾರತ ದೇಶ ಯುವ ರಾಷ್ಟ್ರವಾಗಿದ್ದು, ಈಗ ನಮಗೆ ಯುವ ನಾಯಕತ್ವ ದೊರೆತಿದೆ. ರಾಹುಲ್ ಗಾಂಧಿ ನನ್ನ ಮಗ ಎಂಬ ಒಂದೇ ಕಾರಣಕ್ಕೆ ಈತ ಇಂದು ಈ ಸ್ಥಾನಕ್ಕೇರಿಲ್ಲ. ಈಗ ರಾಹುಲ್ ಒಂದು ರಾಜಕೀಯ ಶಕ್ತಿಯಾಗಿ ಬೆಳೆದಿದ್ದು, ಆತನ ನಾಯಕತ್ವದಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸೋನಿಯಾ ಹೇಳಿದರು. ಅಂತೆಯೇ ರಾಹುಲ್ ಗಾಂಧಿ ವಿರುದ್ಧದ ವಾಗ್ದಾಳಿ ಕುರಿತು ಮಾತನಾಡಿದ ಸೋನಿಯಾ, ಆತನ ವಿರುದ್ಧ ಪ್ರತೀ ದಾಳಿ ಕೂಡ ಆತನನ್ನು ಬಲಶಾಲಿಯನ್ನಾಗಿಸುತ್ತದೆ. ಅತ ಮತ್ತಷ್ಟು ಸಮರ್ಥನಾಗುತ್ತಾ ಸಾಗುತ್ತಾನೆ ಎಂಬ ವಿಶ್ವಾಸ ತಮಗಿದೆ.