ಈ ಹಿಂದೆ ಸಿಎಂ ವಿಜಯ್ ರೂಪಾನಿ ಅವರ ಚುನಾವಣಾ ಪ್ರಯಾಸದ ಜಯಕ್ಕೆ ಸಂಬಂಧಿದಂತೆ ರೂಪಾನಿ ಅವರನ್ನು ಮುಂದಿನ ಸಿಎಂ ಆಗಿ ಮುಂದುವರೆಸಬಾರದು ಎಂದು ಕೆಲ ಬಿಜೆಪಿ ನಾಯಕರ ಬಣ ವಾದಿಸಿತ್ತು. ಆದರೆ ಮತ್ತೊಂದು ಬಣ ರೂಪಾನಿ ಅವರ ನೇತೃತ್ವದಲ್ಲೇ ಬಿಜೆಪಿ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರ ನೇತೃತ್ವದಲ್ಲೇ ಸರ್ಕಾರ ರಚನೆ ಮಾಡಬೇಕು ಎಂದು ವಾದಿಸಿದ್ದರು. ಇದೀಗ ಈ ವಾದಕ್ಕೆ ಬಿಜೆಪಿ ವರಿಷ್ಟರು ಮನ್ನಣೆ ನೀಡಿದ್ದು, ಈ ಹಿಂದೆ ಚುನಾವಣಾ ಪ್ರಚಾರದಲ್ಲಿ ಘೋಷಣೆ ಮಾಡಿದಂತೆ ವಿಜಯ್ ರೂಪಾನಿ ಅವರನ್ನೇ ಮುಂದಿನ ಸರದಿಗೂ ಸಿಎಂ ಆಗಿ ಮುಂದುವರೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.