ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಪ್ರಧಾನಿಯವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರೂ ಕೂಡ ಪ್ರತಿಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳಿಂದಾಗಿ ಕಲಾಪ ಸುಗಮವಾಗಿ ನಡೆಯಲೇ ಇಲ್ಲ. ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆ ಮತ್ತು ಪ್ರಧಾನಿ ಕ್ಷಮೆ ಕೇಳಬೇಕೆಂದು ಬೇರೆ ವಿರೋಧ ಪಕ್ಷಗಳ ಒತ್ತಾಯ ಇಂದು ಬೆಳಗ್ಗೆ ಕಲಾಪ ಆರಂಭವಾದಾಗಿನಿಂದ ಕೇಳಿಬರುತ್ತಲೇ ಇದ್ದವು.