ಅಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು, ಈ ಹಿಂದೆಯೇ ನಾನು ಹೇಳಿದ್ದೆ. ಯುಪಿಎ ಸರ್ಕಾರದ ಅವಧಿಯಲ್ಲೇ ಯಾವುದೇ ರೀತಿಯ ಭ್ರಷ್ಟಾಚಾರವಾಗಿಲ್ಲ, ಯಾವುದೇ ಹಗರಣಗಳೂ ಆಗಿಲ್ಲ. ಇವೆಲ್ಲವೂ ಅಂದಿನ ವಿಪಕ್ಷ ಬಿಜೆಪಿ ಹಾಗೂ ವಿನೋದ್ ರಾಯ್ ಅವರ ಷಡ್ಯಂತ್ರವಾಗಿತ್ತು. ಇದೀಗ ಸ್ವತಃ ನ್ಯಾಯಾಲಯವೇ ಆರೋಪಗಳು ಸುಳ್ಳು ಎಂದು ಹೇಳಿದ್ದು, ವಿನೋದ್ ರಾಯ್ ಅವರು ದೇಶ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.