ಆರೋಪಿಗಳ ವಿರುದ್ಧ ದಾಖಲಿಸಲಾಗಿರುವ ಸಿಬಿಐನ ಆರೋಪ ಪಟ್ಟಿ ಸರಿ ಇಲ್ಲ ಎಂದಿರುವ ಸಿಬಿಐ ನ ವಿಶೇಷ ನ್ಯಾಯಮೂರ್ತಿ ಒಪಿ ಸೈನಿ, ಕೆಲವರು ಈ ಹಗರಣವನ್ನು ಕಲಾತ್ಮಕವಾಗಿ ಸೃಷ್ಟಿಸಿದ್ದಾರೆ ಎಂದಿದ್ದಾರೆ. ಹಗರಣ ನಡೆದಿರುವುದನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ. ಪ್ರವೇಶ ಶುಲ್ಕವನ್ನು ಪರಿಷ್ಕರಣೆ ಮಾಡಲು ಹಣಕಾಸು ಕಾರ್ಯದರ್ಶಿ ಪ್ರಬಲವಾಗಿ ಶಿಫಾರಸು ಮಾಡಿರುವುದು, ಎ.ರಾಜಾ ಅವರು ಸಲ್ಲಿಸಿರುವ ಲೆಟರ್ ಆಫ್ ಇಂಟೆಂಟ್ ಸೇರಿದಂತೆ ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿರುವ ಅನೇಕ ಅಂಶಗಳು ತಪ್ಪಾಗಿ ದಾಖಲಿಸಲಾಗಿದೆ.