2ಜಿ ಹಗರಣವನ್ನು ಕೆಲವರು ಕಲಾತ್ಮಕವಾಗಿ ಸೃಷ್ಟಿಸಿದ್ದರು: 2ಜಿ ತೀರ್ಪಿನ ನ್ಯಾಯಾಧೀಶ

ಯುಪಿಎ ಸರ್ಕಾರಕ್ಕೆ ಕಳಂಕ ತಂದಿದ್ದ 2ಜಿ ಹಗರಣದ ಆರೋಪಿಗಳನ್ನು ಖುಲಾಸೆಗೊಳಿಸಿರುವ ಸಿಬಿಐನ ವಿಶೇಷ ನ್ಯಾಯಾಧೀಶರು ತನಿಖೆ ನಡೆಸಿರುವ ಸಿಬಿಐ ವಿರುದ್ಧವೇ ತೀವ್ರ ಅಸಮಾಧಾನಗೊಂಡಿದ್ದು...
2ಜಿ ಹಗರಣವನ್ನು ಕೆಲವರು ಕಲಾತ್ಮಕವಾಗಿ ಸೃಷ್ಟಿಸಿದ್ದರು: 2ಜಿ ತೀರ್ಪಿನ ನ್ಯಾಯಾಧೀಶ
Updated on
ಯುಪಿಎ ಸರ್ಕಾರಕ್ಕೆ ಕಳಂಕ ತಂದಿದ್ದ 2ಜಿ ಹಗರಣದ ಆರೋಪಿಗಳನ್ನು ಖುಲಾಸೆಗೊಳಿಸಿರುವ ಸಿಬಿಐನ ವಿಶೇಷ ನ್ಯಾಯಾಧೀಶರು ತನಿಖೆ ನಡೆಸಿರುವ ಸಿಬಿಐ ವಿರುದ್ಧವೇ ತೀವ್ರ ಅಸಮಾಧಾನಗೊಂಡಿದ್ದು, ಹಗರಣವನ್ನು ಕೆಲವರು ಕಲಾತ್ಮಕವಾಗಿ ಸೃಷ್ಟಿಸಿದ್ದರು ಎಂದು ಹೇಳಿದೆ. 
ಆರೋಪಿಗಳ ವಿರುದ್ಧ ದಾಖಲಿಸಲಾಗಿರುವ ಸಿಬಿಐನ ಆರೋಪ ಪಟ್ಟಿ ಸರಿ ಇಲ್ಲ ಎಂದಿರುವ ಸಿಬಿಐ ನ ವಿಶೇಷ ನ್ಯಾಯಮೂರ್ತಿ ಒಪಿ ಸೈನಿ, ಕೆಲವರು ಈ ಹಗರಣವನ್ನು ಕಲಾತ್ಮಕವಾಗಿ ಸೃಷ್ಟಿಸಿದ್ದಾರೆ ಎಂದಿದ್ದಾರೆ. ಹಗರಣ ನಡೆದಿರುವುದನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ. ಪ್ರವೇಶ ಶುಲ್ಕವನ್ನು ಪರಿಷ್ಕರಣೆ ಮಾಡಲು ಹಣಕಾಸು ಕಾರ್ಯದರ್ಶಿ ಪ್ರಬಲವಾಗಿ ಶಿಫಾರಸು ಮಾಡಿರುವುದು, ಎ.ರಾಜಾ ಅವರು ಸಲ್ಲಿಸಿರುವ ಲೆಟರ್ ಆಫ್ ಇಂಟೆಂಟ್ ಸೇರಿದಂತೆ ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿರುವ ಅನೇಕ ಅಂಶಗಳು ತಪ್ಪಾಗಿ ದಾಖಲಿಸಲಾಗಿದೆ. 
ಇಂತಹ ಗಂಭೀರ ಪ್ರಕರಣಗಳಲ್ಲಿ ವಾದ ಮಂಡಿಸಬೇಕಾದರೆ ಉಭಯ ಪಕ್ಷದ ವಕೀಲರೂ ಸಹ  ಹೆಚ್ಚಿನ ಶ್ರಮ ವಹಿಸಬೇಕು ಎಂದು ಕೋರ್ಟ್ ಸಲಹೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com