ಮೂವರು ಪಾಕ್ ಯೋಧರ ಕೊಂದ ಭಾರತ, ಓರ್ವ ಯೋಧನಿಗೆ ಗಾಯ: ಪಾಕ್ ಮಾಧ್ಯಮ ವರದಿ

ಪಾಕಿಸ್ತಾನಿ ಸೈನಿಕರ ಮೇಲೆ ಮುಗಿಬಿದ್ದಿರುವ ಭಾರತೀಯ ಸೈನಿಕರು ಸತತ ಗುಂಡಿನ ದಾಳಿ ನಡೆಸಿ ಪಾಕ್ ನ ಮೂವರು ಯೋಧರನ್ನು ಹೊಡೆದುರುಳಿಸಿದೆ ಎಂದು ವರದಿಯೊಂದು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನದ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಭಾರತೀಯ ಸೇನೆಯ ಪ್ರಗತ್ ಸಿಂಗ್ ಎಂಬ ಯೋಧನನ್ನು ಬಲಿ ಪಡೆದ ಬೆನ್ನಲ್ಲೇ ಪಾಕಿಸ್ತಾನಿ ಸೈನಿಕರ ಮೇಲೆ ಮುಗಿಬಿದ್ದಿರುವ  ಭಾರತೀಯ ಸೈನಿಕರು ಸತತ ಗುಂಡಿನ ದಾಳಿ ನಡೆಸಿ ಪಾಕ್ ನ ಮೂವರು ಯೋಧರನ್ನು ಹೊಡೆದುರುಳಿಸಿದೆ ಎಂದು ವರದಿಯೊಂದು ತಿಳಿಸಿದೆ.
ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿರುವಂತೆ ನಿನ್ನೆ ಭಾರತೀಯ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ. ಅಂತೆಯೇ ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾನೆ  ಎಂದು ವರದಿ ಮಾಡಿವೆ. ಅಂತೆಯೇ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆ ಎಲ್ ಒಸಿ ಬಳಿ ಇರುವ ರಾಖಿಕ್ರಿ, ರಾವಲ್ ಕೋಟ್ ಸೆಕ್ಟರ್ ನಲ್ಲಿರುವ ಪಾಕಿಸ್ತಾನಿ ಪಡೆಗಳ ಕ್ಯಾಂಪ್ ಗಳ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ  ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ನಾಲ್ಕು ಸೈನಿಕರ ಮೇಲೆ ಗುಂಡಿನ ಮಳೆಗರೆಯಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಈ ವರದಿಗೆ ಪುಷ್ಠಿ ನೀಡುವಂತೆ ಪಾಕಿಸ್ತಾನದ ಸೇನೆಗೆ ಸೇರಿದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಪೋಸ್ಟ್ ಮಾಡಿದ್ದು, ಪೋಸ್ಟ್ ನಲ್ಲಿ ಭಾರತೀಯ ಸೈನಿಕರ  ಅಪ್ರಚೋದಿತ ಗುಂಡಿನ ದಾಳಿದೆ ಮೂವರು ಪಾಕ್ ಯೋಧರು ಹುತಾತ್ಮರಾಗಿದ್ದಾರೆ ಎಂದು ಪೋಸ್ಟ್ ಹಾಕಿಕೊಂಡಿದೆ. 
ಒಟ್ಟಾರೆ ಪರ್ಗತ್ ಸಿಂಗ್ ಸಾವಿನ ಬಳಿಕ ಪಾಕಿಸ್ತಾನಿ ಪಡೆಗಳ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಪರ್ಗತ್ ಸಿಂಗ್ ಪೋಷಕರು ಆಗ್ರಹ ಪಡಿಸಿದ ಬೆನ್ನಲ್ಲೇ ಪಾಕಿಸ್ತಾನಿ ಸೈನಿಕರ ಸಾವಿನ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com