ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು,ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆ ವ್ಯವಸ್ಥಿತಿ ಸಂಚು. ರಾಜಕೀಯ ಲಾಭಕ್ಕಾಗಿ ಮೂಲ ತತ್ವವನ್ನು ಬಳಸಿಕೊಳ್ಳುವ ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಜನರ ಮುಂದಿಡುತ್ತಿದೆ. ಇದುವೇ ಬಿಜೆಪಿಯವರಿಗೆ ಮತ್ತು ನಮಗಿರುವ ವ್ಯತ್ಯಾಸ ಎಂದರು. ನಾವು ಉತ್ತಮವಾಗಿ ಮಾಡದಿರಬಹುದು, ನಾವು ಸೋತಿರಬಹುದು, ಆದರೆ ನಾವು ಸತ್ಯವನ್ನು ಯಾವತ್ತಿಗೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.