ಮುಂಬೈ ಅಗ್ನಿ ದುರಂತ: ಹುಟ್ಟುಹಬ್ಬ ಸಂಭ್ರಮದ ಖುಷಿಯಲ್ಲೇ ಮೃತಪಟ್ಟ ಯುವತಿ

ಮುಂಬೈನ ಲೋವರ್ ಪಾರೆಲ್ ನಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 15 ಮಂದಿ ಮೃತಪಟ್ಟಿದ್ದು ಈ ಪೈಕಿ ತನ್ನ ಹುಟ್ಟುಹಬ್ಬದ...
ಖುಷ್ಬೂ ಮೆಹ್ತಾ
ಖುಷ್ಬೂ ಮೆಹ್ತಾ
ಮುಂಬೈ: ಮುಂಬೈನ ಲೋವರ್ ಪಾರೆಲ್ ನಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 15 ಮಂದಿ ಮೃತಪಟ್ಟಿದ್ದು ಈ ಪೈಕಿ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವತಿಯು ಕೂಡ ಅಸುನೀಗಿರುವುದು ನೋವಿನ ಸಂಗತಿಯಾಗಿದೆ. 
29 ವರ್ಷದ ಖುಷ್ಬೂ ಮೆಹ್ತಾ ನಿನ್ನೆ ರಾತ್ರಿ ಹುಟ್ಟಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಸ್ನೇಹಿತರನ್ನು ಕರೆದಿದ್ದಳು. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಗ ಅಗ್ನಿ ದುರಂತ ಸಂಭವಿಸಿದ್ದು ರೆಸ್ಟೋರೆಂಟ್ ನ ವಾಶ್ ರೂಂನಲ್ಲಿ ಸಿಲುಕಿ ಖುಷ್ಬೂ ಸಾವನ್ನಪ್ಪಿದ್ದಾಳೆ. 
ಕಟ್ಟಡದ ಕಮಲ ಮಿಲ್ಸ್ ನ ರೆಸ್ಟೋರೆಂಟ್ ನಲ್ಲಿ ಮಧ್ಯರಾತ್ರಿ ಈ ಅಗ್ನಿ ದುರಂತ ಸಂಭವಿಸಿತ್ತು. ಇದುವರೆಗೂ ಉಸಿರುಗಟ್ಟಿ 15 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 11 ಮಂದಿ ಮಹಿಳೆಯರು ಸೇರಿದ್ದಾರೆ. ಇನ್ನು 19 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com