ಒಡಿಶಾ: ನೆಲಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಪೊಲೀಸರ ಸಂಖ್ಯೆ 8ಕ್ಕೆ ಏರಿಕೆ

ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಶಂಕಿತ ನಕ್ಸಲರು ನಿನ್ನೆ ನೆಲಬಾಂಬ್...
ಸ್ಫೋಟ ಸಂಭವಿಸಿದ ಸ್ಥಳ
ಸ್ಫೋಟ ಸಂಭವಿಸಿದ ಸ್ಥಳ
Updated on
ಕೊರಪುಟ್ (ಒಡಿಶಾ): ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಶಂಕಿತ ನಕ್ಸಲರು ನಿನ್ನೆ ನೆಲಬಾಂಬ್ ಸ್ಫೋಟಿಸಿದ್ದರಿಂದ ಮಡಿದ ಪೊಲೀಸ್ ಸಿಬ್ಬಂದಿ  ಸಂಖ್ಯೆ ಗುರುವಾರ 8ಕ್ಕೇರಿದ್ದು  5ಮಂದಿ ಗಾಯಗೊಂಡಿದ್ದಾರೆ.  
ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ಒಡಿಶಾ ರಾಜ್ಯ ಸೇನಾ ಪೊಲೀಸ್ ಇಲಾಖೆಯ 13 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ವ್ಯಾನ್ ಮಾವೋವಾದಿಗಳು ನೆಲಬಾಂಬ್ ಇಟ್ಟಿದ್ದರಿಂದ ಗುಡ್ಡಗಾಡಿನ ರಸ್ತೆಯಲ್ಲಿ ಸ್ಫೋಟಗೊಂಡಿತು.
ಈ ಸ್ಫೋಟ, ಜಗದಲ್ಪುರ್-ವಿಶಾಖಪಟ್ನಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರಪುಟ್ ಜಿಲ್ಲೆಯ ಸುಂಕಿಯಿಂದ 2 ಕಿಲೋ ಮೀಟರ್ ದೂರದಲ್ಲಿ ನಡೆದಿದೆ. 
ಗಾಯಗೊಂಡವರನ್ನು ಕೊರಪುಟ್ ಮತ್ತು ವಿಶಾಖಪಟ್ನಂನ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಘಟನೆಗೆ ಇದು ಹೇಡಿಗಳ ಕೃತ್ಯ ಎಂದು ಬಣ್ಣಿಸಿದ್ದಾರೆ.
ಇದು ಮಾವೋವಾದಿಗಳ ಕೃತ್ಯವಿರಬಹುದೆಂದು ಬಲವಾಗಿ ಶಂಕಿಸಲಾಗಿದ್ದು,  ಕೇಸು ದಾಖಲಿಸುತ್ತೇವೆ ಎಂದು ಒಡಿಶಾ ಪೊಲೀಸ್ ಮಹಾ ನಿರ್ದೇಶಕ ಕೆ.ಬಿ.ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com