ಒಡಿಶಾ: ನೆಲಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಪೊಲೀಸರ ಸಂಖ್ಯೆ 8ಕ್ಕೆ ಏರಿಕೆ

ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಶಂಕಿತ ನಕ್ಸಲರು ನಿನ್ನೆ ನೆಲಬಾಂಬ್...
ಸ್ಫೋಟ ಸಂಭವಿಸಿದ ಸ್ಥಳ
ಸ್ಫೋಟ ಸಂಭವಿಸಿದ ಸ್ಥಳ
ಕೊರಪುಟ್ (ಒಡಿಶಾ): ಒಡಿಶಾದ ಕೋರಪುಟ್ ಜಿಲ್ಲೆಯ ಸುಂಕಿಯಲ್ಲಿ ಶಂಕಿತ ನಕ್ಸಲರು ನಿನ್ನೆ ನೆಲಬಾಂಬ್ ಸ್ಫೋಟಿಸಿದ್ದರಿಂದ ಮಡಿದ ಪೊಲೀಸ್ ಸಿಬ್ಬಂದಿ  ಸಂಖ್ಯೆ ಗುರುವಾರ 8ಕ್ಕೇರಿದ್ದು  5ಮಂದಿ ಗಾಯಗೊಂಡಿದ್ದಾರೆ.  
ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ಒಡಿಶಾ ರಾಜ್ಯ ಸೇನಾ ಪೊಲೀಸ್ ಇಲಾಖೆಯ 13 ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ವ್ಯಾನ್ ಮಾವೋವಾದಿಗಳು ನೆಲಬಾಂಬ್ ಇಟ್ಟಿದ್ದರಿಂದ ಗುಡ್ಡಗಾಡಿನ ರಸ್ತೆಯಲ್ಲಿ ಸ್ಫೋಟಗೊಂಡಿತು.
ಈ ಸ್ಫೋಟ, ಜಗದಲ್ಪುರ್-ವಿಶಾಖಪಟ್ನಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರಪುಟ್ ಜಿಲ್ಲೆಯ ಸುಂಕಿಯಿಂದ 2 ಕಿಲೋ ಮೀಟರ್ ದೂರದಲ್ಲಿ ನಡೆದಿದೆ. 
ಗಾಯಗೊಂಡವರನ್ನು ಕೊರಪುಟ್ ಮತ್ತು ವಿಶಾಖಪಟ್ನಂನ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಘಟನೆಗೆ ಇದು ಹೇಡಿಗಳ ಕೃತ್ಯ ಎಂದು ಬಣ್ಣಿಸಿದ್ದಾರೆ.
ಇದು ಮಾವೋವಾದಿಗಳ ಕೃತ್ಯವಿರಬಹುದೆಂದು ಬಲವಾಗಿ ಶಂಕಿಸಲಾಗಿದ್ದು,  ಕೇಸು ದಾಖಲಿಸುತ್ತೇವೆ ಎಂದು ಒಡಿಶಾ ಪೊಲೀಸ್ ಮಹಾ ನಿರ್ದೇಶಕ ಕೆ.ಬಿ.ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com