ಕಲಾವಿದರೊಬ್ಬರು ರಚಿಸಿದ್ದ ಕಮಲದ ಚಿತ್ರಕ್ಕೆ ನಿತೀಶ್ ಕುಮಾರ್ ಬಣ್ಣ ಹಚ್ಚಿರುವುದು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗುತ್ತಿರುವ ಸೂಚನೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಗಿರಿರಾಜ್ ಸಿಂಗ್, ನಿತೀಶ್ ಕುಮಾರ್ ಬಣ್ಣ ಹಚ್ಚಿರುವುದು ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತದೆ, ಅಷ್ಟೇ ಅಲ್ಲದೇ ಇದು ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಿರುವ ತಾವು ಸ್ವತಂತ್ರರು ಎಂಬ ಸಂದೇಶವೂ ಹೌದು ಎಂದು ಹೇಳಿದ್ದಾರೆ.