ನೋಯ್ಡಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಎಸ್ ಪಿ-ಕಾಂಗ್ರೆಸ್ ಮೈತ್ರಿಯನ್ನು ಮೈನಸ್+ಮೈನಸ್= ಮೈನಸ್ ಸಮೀಕರಣಕ್ಕೆ ಹೋಲಿಸಿದ್ದು, ಬಿಎಸ್ ಪಿ ತಾನು ಈಗಾಗಲೇ ಸೋಲೊಪ್ಪಿಕೊಂಡಿರುವ ಯುದ್ಧದಲ್ಲಿ ಸೆಣೆಸುತ್ತಿದೆ ಎಂದಿದ್ದಾರೆ. ಜಾಟ್ ಸಮುದಾಯದವರು ಬಿಜೆಪಿಗೆ ಬೆಮ್ಬಲ ನೀಡಲಿದ್ದಾರೆ, ನಾನು ಜಾಟ್ ಸಮುದಾಯದವರಿರುವ ಪ್ರದೇಶದಲ್ಲಿ ಹೆಚ್ಚು ಪ್ರವಾಸ ಮಾಡಿದ್ದೇನೆ, ಅಲ್ಲಿನ ಜನತೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.