ನವದೆಹಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯರ್ಥಿಯವರ ಮನೆಯಿಂದ ಕಳವಾಗಿದ್ದ ನೊಬೆಲ್ ಪ್ರಶಸ್ತಿಯ ಪ್ರತಿಕೃತಿ ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ.
ಕಳೆದ ವಾರ ಕೈಲಾಶ್ ಸತ್ಯರ್ಥಿಯವರ ಮನೆಯಿಂದ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರತಿಕೃತಿ ಸೇರಿದಂತೆ ಚಿನ್ನಾಭರಣಗಳು ಮತ್ತು ಹಲವು ಮೌಲ್ಯಯುತ ವಸ್ತುಗಳು ಕಳವಾಗಿದ್ದವು. ಪೊಲೀಸ್ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕದ್ದುಹೋಗಿದ್ದ ಅಷ್ಟೂ ವಸ್ತುಗಳು ಸಿಕ್ಕಿವೆ.
ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯರ್ಥಿ 2014ರಲ್ಲಿ ವಿಶ್ವ ಸಂಸ್ಥೆ ನೀಡುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಾಕಿಸ್ತಾನದ ಮಲಾಲಾ ಯೂಸಫ್ಜೈ ಜೊತೆ ಹಂಚಿಕೊಂಡಿದ್ದರು.