ಕಳೆದ ರಾತ್ರಿ ಪಳನಿಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ ತಮಗೆ 124 ಶಾಸಕರ ಬೆಂಬಲವಿದೆ ಎಂದು ತೋರಿಸಿದ್ದರು. ನಂತರ ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರನ್ನು ಪಳನಿಸ್ವಾಮಿ ಭೇಟಿ ಮಾಡಿದ್ದರು. ಪನ್ನೀರ್ ಸೆಲ್ವಂಗೆ ಸದ್ಯ 11 ಶಾಸಕರ ಬೆಂಬಲವಿದ್ದು, ಚೆನ್ನೈ ಹತ್ತಿರದ ರೆಸಾರ್ಟ್ ನಿಂದ ಬಿಡುಗಡೆಯಾದರೆ ಇನ್ನಷ್ಟು ಶಾಸಕರು ತಮ್ಮತ್ತ ಬರುತ್ತಾರೆ ಎಂದು ರಾಜ್ಯಪಾಲರಿಗೆ ವಿವರಿಸಿದ್ದಾರೆ.