ಅಮೇಥಿಯಲ್ಲಿಂದು ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಪ್ರಧಾನಿಯವರಿಗೆ ಭೀತಿ ಉಂಟಾಗಿದೆ. ಅವರ ಭಾವನೆ ಇತ್ತೀಚೆಗೆ ಬದಲಾಗಿದ್ದು ನೀವು ನೋಡಬಹುದು. ಹಿಂದೆಲ್ಲಾ ಸಂತೋಷದಿಂದ ಇದ್ದ ಅವರು ಈಗ ಆತಂಕದಲ್ಲಿರುತ್ತಾರೆ. ಇದೀಗ ರಾಜ್ಯದ ಜನತೆಯನ್ನು ವಿಭಜಿಸಲು ಹೊರಟಿದ್ದಾರೆ. ದ್ವೇಷವನ್ನು ಹರಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಜನರು ಅವರ ಮಾತುಗಳನ್ನು ಕೇಳುವುದಿಲ್ಲ. ಇಲ್ಲಿನವರು ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಅವರಿಗೆ ಹೇಳಲು ಇಚ್ಛಿಸುತ್ತೇನೆ ಎಂದರು.