ಜಗಳದಲ್ಲಿ ಗರ್ಭಿಣಿಗೆ ಒದ್ದು ಮಗು ಸಾವು: ಬಿಜೆಪಿ ಮುಖಂಡ ಸೇರಿ ಐವರ ಬಂಧನ

ಏರು ಶಬ್ದದಲ್ಲಿ ಧ್ವನಿವರ್ಧಕ ಹಾಕಿದ ಸಂಬಂಧ ನಡೆಯುತ್ತಿದ್ದ ಜಗಳದ ವೇಳೆ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಪಶ್ಚಿಮ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೃಷ್ಣನಗರ: ಏರು ಶಬ್ದದಲ್ಲಿ ಧ್ವನಿವರ್ಧಕ ಹಾಕಿದ ಸಂಬಂಧ ನಡೆಯುತ್ತಿದ್ದ ಜಗಳದ ವೇಳೆ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಕೃಷ್ಣನಗರ್ ಎಂಬಲ್ಲಿ ನಡೆದಿದೆ.

ನಾಡಿಯಾ ಜಿಲ್ಲೆಯಲ್ಲಿ  ನಿನ್ನೆ ರಾತ್ರಿ ಕೀರ್ತನ್ ಸಮಾರಂಭ ನಡೆಯುತ್ತಿತ್ತು, ಈ ವೇಳೆ ಧ್ವನಿ ವರ್ಧಕವನ್ನು ಜೋರಾಗಿ ಹಾಕಲಾಗಿತ್ತು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಶಂಭು ಚಂದ್ರ ದಾಸ್ ಎಂಬಾತನ ವಿರುದ್ಧ ಪ್ರತಿಭಟನೆ ನಡೆಸಿ ಆತನ ಮೇಲೆ ಹಲ್ಲೆ ಮಾಡಲಾಗಿತ್ತು.

ಈ ವೇಳೆ  ಆತನ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲು ಆತನ ಅತ್ತಿಗೆ ಮಾಯಾರಾಣಿ ಸಂತ್ರಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ನಡೆದ ಜಗಳದಲ್ಲಿ ಆಕೆಯ ಹೊಟ್ಟೆಗೆ ಒದೆಯಲಾಗಿದೆ. ಇದರಿಂದ ಆಕೆ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಮೊದಲಿಗೆ ಆಕೆಯನ್ನು ದುಬಾಲಿಯಾ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಕೃಷ್ಣನಗರ್ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಹೊಟ್ಟೆಯಲ್ಲಿದ್ದ ಮಗು ಈ ವೇಳೆ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಸ್ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com